ಶಾಶ್ವತದ ಭ್ರಮೆಯನ್ನು ತಲೆಯಲ್ಲಿ ಹೊತ್ತು
ಸೆಟೆದು ನಿಂತಾ ಮರಕ್ಕೆ ಈಗ ಮುಸ್ಸಂಜೆಯಾ ಹೊತ್ತು /
ಕಾಲ ಕಬಂಧ ಹಸ್ತ ಎಲ್ಲೆಡೆ ಚಾಚಿದಾಗ
ನಲುಗಿದ ಎಲೆಗಳು ಬಿಟ್ಟಗಲುವಾಗ
ಜೀರ್ಣ ಬಾಹುಗಳ ಮೇಲೆಲ್ಲ ಅಳಿಸಲಾರದ ಗುರುತು /
ವೈಭವದ ಸಾಮ್ರಾಜ್ಯ ಕಳಚಿ ಬೀಳುವಾಗ
ರುಕ್ಷ ಜೀವನ ವೃಕ್ಷ ಉಮ್ಮಳಿಸುತಿದೆ ಮೈಮರೆತು,
ಅಪ್ಪಿ ನಿಂತ ಎಲೆಗಳು ತನ್ನವೆಂಬುದು ಬರಿ ಮಿಥ್ಯ
ಅರಿವಾಗುವುದು ಯಾವಾಗ ಕ್ಷಣಿಕ ಬದುಕಿನಾ ಸತ್ಯ?/
ಜನ್ಮ-ರಸ-ಗಂಧಗಳ ರಸಪಾಕ ಈ ಜೀವನ
ವಸಂತದ ಅಮಲಿನಲಿ ಪ್ರಾಣಪುಷ್ಪದ ಜನನ
ಜೀವ ವೃಕ್ಷದ ತಂತುಗಳು ನೆಲದಾಳಕ್ಕೆ ಇಳಿದರೂ
ಮಣ್ಣಿನಾ ಬಲದೆದುರು ಎಲ್ಲವೂ ಬರೀ ಬಂಜರು /
ಜೀವ ವೃಕ್ಷದ ತಂತುಗಳು ನೆಲದಾಳಕ್ಕೆ ಇಳಿದರೂ
ಮಣ್ಣಿನಾ ಬಲದೆದುರು ಎಲ್ಲವೂ ಬರೀ ಬಂಜರು /
ವಾಸನಾಮಯ ಮಣ್ಣಿನಲಿ, ಮಣ್ಣಿನ ಕಾಮನೆಯಲಿ
ನಡೆದಿದೆ ಸಂಬಧಗಳ ಮಾರಣ ಹೋಮ!
ಮೂಕ ಸಾಕ್ಷಿಯ ತೆರದಿ ನಿಂತಿದೆ ಸಕಲ ಭೂವ್ಯೋಮ /
ಗಾಳಿ... ಬಿರುಗಾಳಿ... ಮಳೆ... ಮಿಂಚು... ಒಗ್ಗಿ ಹೋಗಿವೆ ಬದುಕಿಗೆ
ವಂಚನೆಯ ಝಾಳಪಿನಲಿ, ಆಘಾತಗಳ ಸಿಡಿಲಿನಲಿ
ಹಣ್ಣಾದ ಜೀವ ಕ್ಷಣಗಣನೆ ಮಾಡುತಿದೆ /
ದಿನ ನಿತ್ಯ ನವ ಮೃತ್ಯು ಶೋಧಿಸುತ, ತವಕಿಸುತ
ಭಯದ ನೆರಳಿನಲಿ, ಭಯಾಣ ರೂಪದಲಿ
ಬಾಗಿ ನಿಂತಿದೆ ಮರ ಬಿಸಿಲು ಬೆಂಗಾಡಿನಲಿ /
ಜೀವ-ಮರಣದ ಚಕ್ರ ಎಡೆಬಿಡದೆ ತಿರುಗುತಿದೆ
ಮರಣ ನವಮಿಯ ಬೆನ್ನ ಹಿಂದೆಯೇ ದಿವ್ಯ ಅಂಕುರ ಮೂಡಿದೆ.....
(ಮರಾಟಿ ಕವನದ ಪ್ರೇರಣೆಯಿಂದ...)